Monday, August 24, 2015
Sunday, August 9, 2015
ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ
ಬ್ರಾಹಣತ್ವ ಉಳಿಸಿ - ವಾದಿರಾಜ ಕೊಲಕಾಡಿ
ಕಟೀಲು : ಜಪ, ತಪ, ಪೂಜೆ ಪುನಸ್ಕಾರಗಳಿಂದ ಆಚಾರಗಳಿಂದ ವ್ರತಾನುಷ್ಟಾನಗಳಿಂದ ಬ್ರಾಹ್ಮಣತ್ವವನ್ನು ಉಳಿಸುವ ಜವಾಬ್ದಾರಿ ಇದೆ ಎಂದು ವಿದ್ವಾಂಸ ವಾದಿರಾಜ ಕೊಲಕಾಡಿ ಹೇಳಿದರು.
ಅವರು ಭಾನುವಾರ ಕಟೀಲು ಸಾನಿಧ್ಯ ಸಭಾಭವನದಲ್ಲಿ ನಡೆದ
ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ಮೂಡುಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಪ್ರತಿಭಾ ಪುರಸ್ಕಾರ ನೀಡಿದರು.
ಸಾಹಿತಿ ಗಾಯತ್ರಿ ಎಸ್. ಉಡುಪರನ್ನು ಸಂಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ವಿತರಿಸಿದರು.
ಅಧ್ಯಕ್ಷ ಡಾ. ಶಶಿಕುಮಾರ್ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ವೇದವ್ಯಾಸ ಉಡುಪ ವಂದಿಸಿದರು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಟೀಲು ದೇಗುಲದಲ್ಲಿ ೧೨೨ ಮಂದಿಯಿಂದ ರಕ್ತದಾನ ಶಿಬಿರ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ಕಟೀಲು ಕಾಲೇಜು ಎನ್ಎಸ್ಎಸ್, ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್, ವೀರಮಾರುತಿ ವ್ಯಾಯಾಮ ಶಾಲೆ, ವಿಜಯ ಯುವ ಸಂಗಮ, ಆದರ್ಶ ಬಳಗ, ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ, ಚೇತನಾ, ದುರ್ಗಾಂಬಿಕಾ ಮಂಡಲ, ನಂದಿನಿ ಬ್ರಾಹ್ಮಣ ಸಭಾ, ಸಜ್ಜನ ಬಂಧುಗಳು ಮುಂತಾದ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರದಲ್ಲಿ ಕೆಎಂಸಿ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಗೆ ೧೨೨ ಮಂದಿ ರಕ್ತದಾನ ಮಾಡಿದರು.
ಕಟೀಲು ದೇಗುಲ ಅರ್ಚಕ ಶ್ರೀಹರಿ ಆಸ್ರಣ್ಣ, ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿ,, ಜಿ.ಪಂ.ಸದಸ್ಯ ಈಶ್ವರ ಕಟೀಲ್, ಶಾಲೆಟ್ ಪಿಂಟೋ ಉದ್ಘಾಟಿಸಿದರು. ಕೆಎಂಸಿ ಬ್ಲಡ್ ಬ್ಯಾಂಕ್ನ ಭವಾನಿಶಂಕರ್, ದೇಗುಲದ ಪ್ರಬಂಧಕ ವಿಜಯ ಕುಮಾರ್, ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಎನ್ಎಸ್ಎಸ್ನ ಸುನೀತಾ, ಕೃಷ್ಣ ಕಾಂಚನ್, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಸರೋಜಿನಿ, ಉಪಾಧ್ಯಕ್ಷ ಮಾರ್ಗನ್, ಸದಸ್ಯರಾದ ಜನಾರ್ದನ ಕಿಲೆಂಜೂರು, ದಾಮೋದರ್ ಶೆಟ್ಟಿ, ರಮಾನಂದ ಪೂಜಾರಿ, ದೇವದಾಸ ಮಲ್ಯ, ವ್ಯಾಯಾಮ ಶಾಲೆಯ ಕೇಶವ ಕರ್ಕೇರ, ಜೆರಾಲ್ಡ್ ಮಿನೇಜಸ್, ನಿಶಾಂತ್ ಕಿಲೆಂಜೂರು, ರಘುನಾಥ್ ಕಾಮತ್, ಶಿಕ್ಷಕ ಗೋಪಾಲ ಶೆಟ್ಟಿ ಮುಂತಾದವರಿದ್ದರು.
Friday, July 3, 2015
ಉಚಿತ ಯೋಗ ತರಬೇತಿ ಶಿಬಿರ
ವಿಶ್ವ ಯೋಗ ದಿನದ ಅಂಗವಾಗಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ಸಂಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಒಂದು ವಾರದ ಉಚಿತ ಯೋಗ ತರಬೇತಿ ಶಿಬಿರವನ್ನು ದೇವಳದ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿದರು ಹಾಗೂ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಆಶೀರ್ವಚನವಿತ್ತರು. ವೇದಿಕೆಯಲ್ಲಿ ಪತಂಜಲಿ ಯೋಗ ಸಮಿತಿ ಮೂಡಬಿದಿರೆ ವಲಯದ ಅಧ್ಯಕ್ಷರಾದ ಶ್ರೀ ಯು. ಪದ್ಮನಾಭ ಶೆಟ್ಟಿ, ಸಂಸ್ಥೆಯ ಪ್ರಾಚಾರ್ಯರಾದ ಪ್ರೊ. ಜಯರಾಮ ಪೂಂಜ ಹಾಗೂ ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕರಾದ ಶ್ರೀ ಶಂಕರ ಮರಾಠೆ ಹಾಗೂ ಡಾ| ಕೇಶವ ಹೆಗ್ಡೆಯವರು ಉಪಸ್ಥಿತರಿದ್ದರು. ಬಾಬಾ ರಾಮ್ದೇವ್ಜೀರವರ ಶಿಷ್ಯರಾದ ಶ್ರೀ ಶರತ್ ಮತ್ತು ಶ್ರೀ ಹರಿಪ್ರಸಾದ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳು ಯೋಗತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸುವುದರೊಂದಿಗೆ ಯೋಗದ ಮಹತ್ವವನ್ನು ಪಡೆದುಕೊಂಡರು.
ಸಂಸ್ಥೆಯ ಪ್ರಾಚಾರ್ಯ ಸ್ವಾಗತಿಸಿ, ಉಪನ್ಯಾಸಕರಾದ ಡಾ| ಕೇಶವ ಹೆಗ್ಗಡೆಯವರು ಧನ್ಯವಾದವಿತ್ತರು. ಶ್ರೀಯುತ ಶಂಕರ ಮರಾಠೆಯವರು ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ಪ್ರಾಚಾರ್ಯ ಸ್ವಾಗತಿಸಿ, ಉಪನ್ಯಾಸಕರಾದ ಡಾ| ಕೇಶವ ಹೆಗ್ಗಡೆಯವರು ಧನ್ಯವಾದವಿತ್ತರು. ಶ್ರೀಯುತ ಶಂಕರ ಮರಾಠೆಯವರು ಕಾರ್ಯಕ್ರಮ ನಿರ್ವಹಿಸಿದರು.
Wednesday, July 1, 2015
ಕಟೀಲು ಕಾಲೇಜು ಎನ್ಎಸ್ಎಸ್ ಉದ್ಘಾಟನೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೇ ಕಾಲೇಜಿನ ಎನ್ಎಸ್ಎಸ್ ಘಟಕಗಳ ಈ ಸಾಲಿನ ಚಟುವಟಿಕೆಗಳ ಉದ್ಘಾಟನೆಯನ್ನು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡುವ ಮೂಲಕ ಕೆಂಚನಕೆರೆಯ ಯೋಗಸಾಧಕ ಜಯ ಶೆಟ್ಟಿಯವರು ಉದ್ಘಾಟಿಸಿದರು.
ಯೋಗದಿಂದ ಅನಾರೋಗ್ಯವನ್ನು ದೂರಮಾಡಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಜಯ ಶೆಟ್ಟಿ ಹೇಳಿದರು.
ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಕಿನ್ನಿಗೋಳಿಯ ಉದ್ಯಮಿ ಶ್ರೀಕಾಂತ್, ಎನ್ಎಸ್ಎಸ್ ಯೋಜನಾಧಿಕಾರಿ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯದರ್ಶಿಗಳಾದ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತಾ ವಂದಿಸಿದರು.
ಯೋಗದಿಂದ ಅನಾರೋಗ್ಯವನ್ನು ದೂರಮಾಡಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕೆಂದು ಜಯ ಶೆಟ್ಟಿ ಹೇಳಿದರು.
ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ, ಕಿನ್ನಿಗೋಳಿಯ ಉದ್ಯಮಿ ಶ್ರೀಕಾಂತ್, ಎನ್ಎಸ್ಎಸ್ ಯೋಜನಾಧಿಕಾರಿ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯದರ್ಶಿಗಳಾದ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತಾ ವಂದಿಸಿದರು.
Tuesday, June 30, 2015
ಕಟೀಲಿನಲ್ಲಿ ರಾಮಾಯಣ ಕಥಾ ಮಾಲಿಕೆ
ಕಟೀಲು : ತಂದೆಯ ಮಾತಿನಂತೆ ವನವಾಸಕ್ಕೆ ತೆರಳಿದ ಶ್ರೀ ರಾಮಚಂದ್ರ ಆದರ್ಶ ಪುರುಷನಾಗಿ ಸರ್ವರಿಂದಲೂ ಪೂಜ್ಯನೀಯನೆನಿಸಿದಾತ. ರಾಮರಾಜ್ಯವಾಗಲಿ ಎಂಬ ಆಶಯದ ಹಿಂದೆ ಅವತ್ತಿನ ಆಡಳಿತದ ಶ್ರೇಷ್ಟತೆ ಅರ್ಥೈಸಿಕೊಳ್ಳಬಹುದೆಂದು ಯಕ್ಷಗಾನ ಕಲಾವಿದ ವಾಟೆಪಡ್ಪು ವಿಷ್ಣು ಶರ್ಮ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿ ತಿಂಗಳು ರಾಮಾಯಣದ ವಿವಿಧ ಪಾತ್ರಗಳ ಪರಿಚಯ ನೀಡುವ ರಾಮಾಯಣ ಕಥಾ ಮಾಲಿಕೆಯಲ್ಲಿ ಶ್ರೀ ರಾಮನ ಬಗ್ಗೆ ಉಪನ್ಯಾಸವಿತ್ತರು.
Friday, June 12, 2015
ಕಟೀಲು ಸಾಮೂಹಿಕ ವಿವಾಹ :
೮ಜೋಡಿಗಳು ದಾಂಪತ್ಯಕ್ಕೆ ಜೀವನಕ್ಕೆ
ಕಟೀಲು : ಇಲ್ಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಉಸ್ತುವಾರಿಯಲ್ಲಿ ಬುಧವಾರ ನಡೆದ ಎಂಟನೆಯ ವರುಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ಏಳು ವರುಷಗಳಲ್ಲಿ ೭೫ಜೋಡಿಗಳು ವಿವಾಹವಾಗಿದ್ದರೆ ಈ ವರುಷ ಹರೀಶ್ - ಹರಿಣಾಕ್ಷಿ, ಮಹಾಬಲ - ಬೇಬಿ, ಶಿವಕುಮಾರ್ - ಗೀತಾ, ರಂಜಿತ್ - ಸಾವಿತ್ರಿ, ಶಿವಪ್ರಸಾದ ಎ.ಪಿ.- ಯಶೋದಾ, ಸಂದೀಪ್ - ಶ್ವೇತಾ, ವಸಂತ - ವಾಣಿಶ್ರೀ, ಹರಿಪ್ರಸಾದ್ - ಶ್ವೇತಾ ವಿವಾಹವಾದರು.
ಮುಂಬೈನ ಸುವರ್ಣ ಬಾಬಾ, ಅನಿಲ್ ಶೆಟ್ಟಿ, ರಾಘವೇಂದ್ರ ಶಾಸ್ತ್ರಿ, ಕೇಶವ ಅಂಚನ್ ಮುಂಬೈ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಪಿ. ಸತೀಶ್ ರಾವ್, ಧನಂಜಯ ಆಚಾರ್, ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ ಮುಂತಾದವರಿದ್ದರು.
ಕಟೀಲು : ಇಲ್ಲಿನ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣರ ಉಸ್ತುವಾರಿಯಲ್ಲಿ ಬುಧವಾರ ನಡೆದ ಎಂಟನೆಯ ವರುಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಎಂಟು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ಏಳು ವರುಷಗಳಲ್ಲಿ ೭೫ಜೋಡಿಗಳು ವಿವಾಹವಾಗಿದ್ದರೆ ಈ ವರುಷ ಹರೀಶ್ - ಹರಿಣಾಕ್ಷಿ, ಮಹಾಬಲ - ಬೇಬಿ, ಶಿವಕುಮಾರ್ - ಗೀತಾ, ರಂಜಿತ್ - ಸಾವಿತ್ರಿ, ಶಿವಪ್ರಸಾದ ಎ.ಪಿ.- ಯಶೋದಾ, ಸಂದೀಪ್ - ಶ್ವೇತಾ, ವಸಂತ - ವಾಣಿಶ್ರೀ, ಹರಿಪ್ರಸಾದ್ - ಶ್ವೇತಾ ವಿವಾಹವಾದರು.
ಮುಂಬೈನ ಸುವರ್ಣ ಬಾಬಾ, ಅನಿಲ್ ಶೆಟ್ಟಿ, ರಾಘವೇಂದ್ರ ಶಾಸ್ತ್ರಿ, ಕೇಶವ ಅಂಚನ್ ಮುಂಬೈ, ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಪಿ. ಸತೀಶ್ ರಾವ್, ಧನಂಜಯ ಆಚಾರ್, ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ ಮುಂತಾದವರಿದ್ದರು.
Saturday, June 6, 2015
ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣೆ
ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ೯೦ ವಿದ್ಯಾರ್ಥಿಗಳಿಗೆ ಕಟೀಲು ಸ್ಪೋರ್ಟ್ಸ್ ಏಂಡ್ ಗೇಮ್ಸ್ ಕ್ಲಬ್ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದಾನಿ ರಾಜು ಪಿ. ಶೆಟ್ಟಿ ಮುಂಬೈ, ರವೀಶ ಪಿಂಟೋ, ಸಂಸ್ಥೆಯ ಕೇಶವ ಕಟೀಲು, ಪ್ರದೀಪ್ ಶೆಟ್ಟಿ, ಸುವಿನ್ ಆಚಾರ್ಯ, ರಮೇಶ್ ಐ.ಕೆ, ಐವನ್ ಡಿಸೋಜ, ಮುಖ್ಯ ಶಿಕ್ಷಕಿ ವನಮಾಲಾ ಕೆ., ಗೋಪಾಲ್ ಮತ್ತಿತರರಿದ್ದರು.
Tuesday, April 28, 2015
ವಿಜಯಾ ಬ್ಯಾಂಕಿನಿಂದ ಕುಡಿಯುವ ನೀರು
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿಜಯಾ ಬ್ಯಾಂಕಿನ ರೀಜನಲ್ ಮೆನೇಜರ್ ಉದಯಕುಮಾರ ಶೆಟ್ಟಿ, ಪ್ರಬಂಧಕಿ ವಿನುತಾ ಪಿ.ವಿ, ದೀಪಾ ಶೆಟ್ಟಿ, ಪ್ರಭಾರ ಆಡಳಿತಾಧಿಕಾರಿ ಶಿವಕುಮಾರಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಪ್ರಬಂಧಕರಾದ ವಿಜಯಕುಮಾರ್ ಉಪಸ್ಥಿತರಿದ್ದರು
ಕಟೀಲು ಕ್ಯಾಲೆಂಡರ್ ಬಿಡುಗಡೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮನ್ಮಥ ಸಂವತ್ಸರದ ದಿನದರ್ಶಿಕೆಯನ್ನು ಬುಧವಾರ ಸೌರಯುಗಾದಿಯಂದು ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.

ದೇಗುಲದ ವಿಶೇಷ ದಿನಗಳು, ಛಾಯಾಚಿತ್ರಗಳನ್ನು ಕ್ಯಾಲೆಂಡರ್ ಒಳಗೊಂಡಿದೆ.
Sunday, April 26, 2015
ಕಟೀಲಿಗೆ ಮುಜರಾಯಿ ಆಯುಕ್ತೆ ಪಲ್ಲವಿ ಭೇಟಿ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತೆ ಪಲ್ಲವಿ ಅಕುರಾತಿ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಹೊಸದಾಗಿ ಆಗಿರುವ ಚಿನ್ನದ ರಥ, ಕುದ್ರು ಭ್ರಾಮರೀವನದ ಗುಡಿಗಳನ್ನು ಗಮನಿಸಿದರು. ದ್ರವ ತ್ಯಾಜ್ಯ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದ ಆಯುಕ್ತೆ ಪಲ್ಲವಿ ಕಟೀಲು, ದ್ರವ ತ್ಯಾಜ್ಯ ಘಟಕ ಮಾಡಿರುವ ರಾಜ್ಯದ ಮೊದಲ ದೇವಸ್ಥಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ನದಿ ಹಾಗೂ ಪರಿಸರವನ್ನು ಇನ್ನಷ್ಟು ಸ್ವಚ್ಚವಾಗಿರಿಸಲು ಮುತುವರ್ಜಿ ವಹಿಸಲು ಸೂಚಿಸಿದರು. ಬಯೋಗ್ಯಾಸ್ ವ್ಯವಸ್ಥೆ ಅಳವಡಿಸಿ ಅನ್ನದಾನದ ಅಡುಗೆ ತಯಾರಿಸುವ ಬಗ್ಗೆ ಯೋಜನೆ ರೂಪಿಸಲು ಸೂಚಿಸಿದರು.
ಅನ್ನಛತ್ರ, ಭೋಜನ ವ್ಯವಸ್ಥೆಗಳನ್ನು ನೋಡಿದ ಅವರು ಅನ್ನದಾನಕ್ಕೆ ಮತ್ತು ವಿದ್ಯಾ ದಾನಕ್ಕೆ ೮೦ಜಿ ತೆರಿಗೆ ವಿನಾಯತಿಯ ನೀಡುವ ಮೊದಲ ದೇವಸ್ಥಾನ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಿಟ್ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ನೂತನ ಗೋಶಾಲೆ, ಸಂಸ್ಕೃತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಂಗಳೂರು ಸಹಾಯಕ ಆಯುಕ್ತ ಶಿವಕುಮಾರಯ್ಯ, ಅಧಿಕಾರಿಗಳಾದ ಉಮೇಶ ಸುಧಾಕರ, ಪ್ರಬಂಧಕ ವಿಜಯ ಕುಮಾರ್ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ
Saturday, April 25, 2015
ಕಟೀಲು ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆ
ಇಂಗ್ಲಿಷ್ ಮಾಧ್ಯಮ ಶಾಲೆಯ ಆರಂಭದ ಪ್ರಸ್ತಾಪ
ಕಟೀಲು : ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸುವುದೆಂದು ಗುರುವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಕನ್ನಡ ಮಾಧ್ಯಮದ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಆಗದಂತೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್, ಯಕ್ಷಗಾನ, ಸಂಗೀತ ನೃತ್ಯ ಮುಂತಾದ ಅನೇಕ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ಸವಿನೆನಪಿನಲ್ಲಿ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುವುದು ಅಗತ್ಯವಾಗಿದೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಶಾಲೆಯ ಸವಲತ್ತುಗಳನ್ನು ಇನ್ನಷ್ಟು ಹೆಚ್ಚಿಸುವುದರ ಬಗ್ಗೆ ಸಲಹೆಗಳು ಬಂದವು.
ದೇಗುಲವು ಈಗಾಗಲೇ ಪ್ರಾಥಮಿಕ ಹಂತದಿಂದ ಪದವಿಯವರೆಗೆ ವರ್ಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಕಳೆದ ಆರೇಳು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗೆ ಎರಡೂವರೆ ಕೋಟಿ ರೂ.ಗಳನ್ನು ವ್ಯಯಿಸಿಲಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ನಿವೃತ ಉಪಪ್ರಾಚಾರ್ಯ ಉಮೇಶ ರಾವ್ ಎಕ್ಕಾರು, ರುಕ್ಮಯದಾಸ್, ಈಶ್ವರ ಕಟೀಲ್, ಮುಖ್ಯ ಶಿಕ್ಷಕಿ ವನಮಾಲಾ, ಗೋಪಾಲ್, ರಾಜೇಶ್, ಕೃಷ್ಣ, ಪದ್ಮನಾಭ ಭಟ್, ಸಂಜೀವ ಮಡಿವಾಳ, ಕೆ.ವಿ.ಶೆಟ್ಟಿ, ಲೋಕೇಶ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಭಾಸ್ಕರ ದಾಸ್, ಸುಬ್ರಹ್ಮಣ್ಯ ಪ್ರಸಾದ್, ತಿಮ್ಮಪ್ಪ ಕೋಟ್ಯಾನ್, ಭುವನಾಭಿರಾಮ ಉಡುಪ, ನೀಲಯ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
Friday, March 13, 2015
Thursday, February 5, 2015
ತಾ. ೯: ಕಟೀಲು ಭ್ರಾಮರೀವನದ ನೂತನ ಗುಡಿಯಲ್ಲಿ ಬ್ರಹ್ಮಕಲಶ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೂಲಸ್ಥಳವಾದ ಭ್ರಾಮರೀ ಅವತಾರವಾಗಿ ಅರುಣಾಸುರನ ಸಂಹಾರವಾದ ಸ್ಥಳ ಇನ್ನು ಮುಂದಕ್ಕೆ ಭ್ರಾಮರೀವನ ಎನಿಸಿಕೊಳ್ಳಲಿದೆ. ಇಲ್ಲಿ ಉದ್ಭವ ಲಿಂಗವಿರುವಲ್ಲಿ ನೂತನವಾಗಿ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು, ತಾ.೯ರಂದು ಬೆಳಿಗ್ಗೆ ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ದೇಗುಲದಲ್ಲಿ ತಿಳಿಸಿದರು.
ನೂತನ ಗರ್ಭಗುಡಿಯನ್ನು ಪಡುಬಿದ್ರಿ ಎರ್ಮಾಳುಗುತ್ತು ಶ್ರೀಮತಿ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳು ಕಲ್ಲಟೆಗುತ್ತು ಮೂಲಕುಟುಂಬಸ್ಥರು ಸೇವಾರೂಪದಲ್ಲಿ ನಿರ್ಮಿಸಿದ್ದಾರೆ.
s
ಕಲಾತ್ಮಕ ಗರ್ಭಗುಡಿ
೨೦೧೩ನೇ ಇಸವಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನಿರ್ದೇಶಿಸಿದಂತೆ ಮೂಲಲಿಂಗದ ಸುತ್ತ ಧ್ವಜ ಆಯದಲ್ಲಿ ಗರ್ಭಗುಡಿಯು ಚತುಃಶಾಲೆಯ ಮಾದರಿಯಂತೆ ನಿರ್ಮಾಣವಾಗಿದ್ದು ಅದರ ಅಂಗಣದಲ್ಲಿ ನೆಲಮಟ್ಟದಲ್ಲೇ ಮೂಲಬಿಂಬವು ಮಳೆ ಸೂರ್ಯ ರಶ್ಮಿಯನ್ನು ಪಡೆಯುವ ರೀತಿಯಲ್ಲಿ ವಾಸ್ತುವನ್ನು ವಿನ್ಯಾಸಗೊಳಿಸಲಾಗಿದೆ. ಗುಡಿಯು ಶಿಲಾಮಯವಾಗಿದ್ದು ಮರ ಹಾಗೂ ತಾಮ್ರದಿಂದ ಮಾಡು ನಿರ್ಮಾಣವಾಗಿದೆ. ಶಿಲಾಮಯ ಗರ್ಭಗುಡಿಯು ಕಲಶಬಂಧ ಅಧಿಷ್ಠಾನವನ್ನು ಹೊಂದಿದ್ದು, ಭಿತ್ತಿಸ್ತಂಭ, ಪಂಜರ, ಕುಂಭಲತೆಗಳನ್ನು ಒಳಗೊಂಡಿದೆ. ಚಾಲುಕ್ಯ ಶೈಲಿಯ ೨ ಕಂಭಗಳ ಮೇಲೆ ಮುಖಮಂಟಪ ಇದೆ. ಮುಖ ಮಂಟಪದ ಮೇಲೆ ದಶಾವತಾರ ಹಾಗೂ ಶ್ರೀ ಕ್ಷೇತ್ರದ ಇತಿಹಾಸದ ಮರದ ಕೆತ್ತನೆಯ ಮೂರ್ತಿಗಳು ಸೇರಿ ಮಾಡಿನ ಮರಗಳಲ್ಲಿ ಹಲವಾರು ಸೂಕ್ಷ್ಮ ಕೆತ್ತನೆಯ ಕೆಲಸಗಳನ್ನು ಮಾಡಲಾಗಿದೆ. ತಾಮ್ರದ ಮಾಡಿನ ಶ್ರೀ ಮುಖದಲ್ಲಿ ಕಿಂಪುರುಷನ ಮರದ ಕೆತ್ತನೆ ರಮಣೀಯವಾಗಿದೆ. ಕೇರಳ ಅಥವಾ ಕರಾವಳಿಯ ಶೈಲಿಯಲ್ಲಿ ನಿರ್ಮಿತ ಈ ಗುಡಿಯನ್ನು ಇಪ್ಪತ್ತು ಮಂದಿ ಶಿಲ್ಪಿಗಳು ಸುಮಾರು ಒಂಭತ್ತು ತಿಂಗಳ ಕಾಲದಲ್ಲಿ ನಿರ್ಮಿಸಿದ್ದಾರೆ ಎಂದವರು ತಿಳಿಸಿದರು.
೧೯೭೭ರ ತನಕ ವರ್ಷಕ್ಕೊಮ್ಮೆ ಮಾತ್ರ ಜಾತ್ರೆಯ ಸಂದರ್ಭ ಇಲ್ಲಿ ದೇವರಿಗೆ ಪೂಜೆ ನಡೆಯುತ್ತಿದ್ದು, ಅಷ್ಟಮಂಗಲದಲ್ಲೂ ಒಂದು ಬಾರಿ ಪೂಜೆಯ ಬಗ್ಗೆ ತಿಳಿಸಲಾಗಿದೆ. ಬ್ರಹ್ಮಕಲಶದ ಬಳಿಕ ತಂತ್ರಿಗಳ ನಿರ್ದೇಶನದಂತೆ ಭ್ರಾಮರೀ ವನದಲ್ಲಿ ಪೂಜೆಯ ಕುರಿತು ನಿರ್ಣಯಿಸಲಾಗುವುದು.
ಈಗಾಗಲೇ ಅರ್ಚಕರ ಸ್ನಾನಕ್ಕಾಗಿ ಹಾಗೂ ದೇವಿಯ ತೀರ್ಥಕ್ಕಾಗಿ ೨ ಕೆರೆಗಳೂ ಇಲ್ಲಿ ನಿರ್ಮಾಣವಾಗಿದ್ದು, ನಾಗನಿಗೆ ಚಿತ್ರಕೂಟ ಮತ್ತು ವ್ಯಾಘ್ರಚಾಮುಂಡಿಯ ಅಧಿಷ್ಠಾನವನ್ನು ನಿರ್ಮಿಸಲಾಗಿದೆ. ಇಲ್ಲಿ ಮುಂದೆ ಪರಿಧಿ, ಯಾಜ್ಞಿಕ ವೃಕ್ಷ ಪ್ರತಿಷ್ಠೆ, ಯಾಗಶಾಲೆ, ತುಳಸಿ ಪುಷ್ಪೋದ್ಯಾನ, ನಾಗನಿಗಾಗಿಯೇ ನೀರು ಕುಡಿಯಲು ನಾಗಕೂಪ, ಧ್ಯಾನಕೇಂದ್ರ ಮತ್ತು ಕ್ಷೇತ್ರದ ಮಹಾತ್ಮೆಯನ್ನು ಸಾರುವ ಶಿಲಾಮಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಯೋಜನೆಗಳನ್ನು ಭಕ್ತರ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು. ಈ ಸುಂದರ ಗರ್ಭಗುಡಿಯನ್ನು ಪ್ರಸಿದ್ಧ ವಾಸ್ತುತಜ್ಞರಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ನಿರ್ದೇಶನದಂತೆ ಉಡುಪಿಯ ಎಲ್ಲೂರಿನ ವಿಷ್ಣುಮೂರ್ತಿ ಭಟ್ ಇವರ ಉಸ್ತುವಾರಿಯಲ್ಲಿ ಶಿಲ್ಪಿಗಳು ನಿರ್ಮಿಸಿದ್ದಾರೆ. ಕುದ್ರುವಿನ ಎರಡೂ ಬದಿಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿರುವುದರಿಂದ ಉತ್ತಮವಾಗಿ ನೀರು ಸಂಗ್ರಹವಾಗಿದ್ದು, ಕುದ್ರುವಿನ ಸೌಂದರ್ಯ ಇನ್ನಷ್ಟು ಹೆಚ್ಚಿದೆ. ಪ್ರವಾಸಿಗಳಿಗೆ ಉತ್ತಮ ವೀಕ್ಷಣೆಯ ಆಧ್ಯಾತ್ಮ ಕೇಂದ್ರವಾಗಿಯೂ ಈ ಕುದ್ರು ಮೂಡಿಬರಲಿದೆ. ರಕ್ಷಣೆ ಹಾಗೂ ಸ್ವಚ್ಛತೆಗೆ ಗಮನ ನೀಡಲಾಗುವುದು ಎಂದು ಅವರು ತಿಳಿಸಿದರು.
ತತ್ಪ್ರಯುಕ್ತ ತಾ.೯ರ ಸೋಮವಾರ ಮಧ್ಯಾಹ್ನದಿಂದ ಕಟೀಲು ಮೇಳದ ಕಲಾವಿದರಿಂದ ಯಕ್ಷಗಾನ ಗಾನಾಮೃತ, ಕದ್ರಿ ಗೋಪಾಲನಾಥ್ರಿಂದ ಸ್ಯಾಕ್ಸೋಫೋನ್ ವಾದನವಿದೆ. ಸಭಾ ಕಾರ್ಯಕ್ರಮದಲ್ಲಿ ಪೇಜಾವರದ ಈರ್ವರು ಯತಿಗಳು, ಎಡನೀರು ಶ್ರೀಗಳು, ಒಡಿಯೂರು, ಮಾಣಿಲ, ಕೊಂಡೆವೂರು ಸ್ವಾಮೀಜಿಗಳು, ಕೇಂದ್ರ ಸಚಿವ ಶ್ರೀಪಾದ ನಾಯಕ್, ಸಚಿವರಾದ ಅಭಯಚಂದ್ರ, ವಿನಯಕುಮಾರ ಸೊರಕೆ, ಯು.ಟಿ.ಖಾದರ್, ಸಾಂಸದ ನಳಿನ್ ಕುಮಾರ್, ಗಣೇಶ್ ಕಾರ್ಣಿಕ್ ಮುಂತಾದವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದಾನಿ ಸತೀಶ್ ಶೆಟ್ಟಿ ಎರ್ಮಾಳು, ಜೆ.ಸಿ.ಕುಮಾರ್, ಬಿ.ಟಿ.ಬಂಗೇರ, ರಾಘವೇಂದ್ರ ಆಚಾರ್ಯ, ಸುಷ್ಮಾ ಎಂ. ಮಲ್ಲಿ, ಚಂದ್ರಹಾಸ ರೈ, ವಾಮಯ್ಯ ಶೆಟ್ಟಿ, ಪದ್ಮನಾಭ ಪಯ್ಯಡೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.
ಅತ್ಯಂತ ಕಲಾತ್ಮಕ ಸುವರ್ಣ ನಡೆದೇಗುಲ
ಸರಕಾರದ ಉಸ್ತುವಾರಿಯಲ್ಲಿ ನಿರ್ಮಿತ ಮೊದಲ ಚಿನ್ನದ ರಥ
ಕೇರಳ, ಮಹಾರಾಷ್ಟ್ರಗಳಲ್ಲಿ ಕರ್ನಾಟಕದ ನೂರಾರು ಕಡೆಗಳಲ್ಲಿ ಚಿನ್ನದ ನಾನಾ ಪ್ರಾಕಾರಗಳನ್ನು ನಿರ್ಮಿಸಿಕೊಟ್ಟಿದ್ದೇವೆ. ಇಲ್ಲಿಗಿಂತ ಹೆಚ್ಚಿನ ಚಿನ್ನವನ್ನು ಬಳಸಿ ವಿಗ್ರಹ, ಪಲ್ಲಕಿ ನಿರ್ಮಿಸಿದ್ದೇವೆ. ಆದರೆ ಕಟೀಲಿನ ಚಿನ್ನದ ರಥ ನಾವು ನಿರ್ಮಿಸಿದ ಎಲ್ಲವುಗಳಿಗಿಂತ ಹೆಚ್ಚು ಕಲಾತ್ಮಕವಾಗಿ ಮೂಡಿ ಬಂದಿದೆ ಎಂದು ಆತ್ಮತೃಪ್ತಿಯಿಂದ ಹೇಳಿದವರು ರಥ ನಿರ್ಮಾತೃ ಗುತ್ತಿಗೆ ವಹಿಸಿಕೊಂಡ ಸ್ವರ್ಣ ಜ್ಯುವೆಲ್ಲರ್ಸ್ ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್.
ಕಟೀಲು ಶ್ರೀ ದುರ್ಗಾಮೇಶ್ವರೀ ದೇವಸ್ಥಾನದ ಭಕ್ತಾದಿಗಳ ದೇಣಿಗೆಯಿಂದ ನಿರ್ಮಾಣವಾದ ರಾಜ್ಯದ ಅತಿ ಎತ್ತರದವಾದ ಚಿನ್ನದ ರಥವನ್ನು ದಿನಾಂಕ ೮ರ ರಾತ್ರಿ ಗಂಟೆ ೮.೩೦ಕ್ಕೆ ಶ್ರೀ ದೇವಿಗೆ ಸಮರ್ಪಿಸಲಾಗುವುದು. ಒಟ್ಟು ೧೪ ಅಡಿ ೧ ಇಂಚು ಎತ್ತರವುಳ್ಳ ಈ ರಥಕ್ಕೆ ೧೯೦ಕಿಲೋ ಬೆಳ್ಳಿ ಹಾಗೂ ೧೧ ಕಿಲೋ ಚಿನ್ನವನ್ನು ಅಳವಡಿಸಲಾಗಿದೆ. ಎಂಟು ಮುಕ್ಕಾಲು ಕೆಜಿ ಚಿನ್ನವನ್ನು ಹಾಗೂ ಒಂದು ಕೋಟಿ ೬೪ಲಕ್ಷದ ೫೨ಸಾವಿರ ರೂ.ಗಳಷ್ಟು ಮೊತ್ತವನ್ನು ಭಕ್ತರೇ ನೀಡಿದ್ದಾರೆ. ಮರದ ರಥವನ್ನು ಶಿಲ್ಪಿಗಳಾದ ಉಡುಪಿಯ ದಿ.ಕೃಷ್ಣಮೂರ್ತಿ ಆಚಾರ್ಯ ಅವರ ಮಗ ಸುದರ್ಶನ ಆಚಾರ್ಯರು, ಸ್ವರ್ಣ ರಥದ ರಚನೆಯನ್ನು ಸ್ವರ್ಣ ಜುವೆಲ್ಲರ್ಸ್ ಉಡುಪಿ ಸಂಸ್ಥೆ ತನ್ನ ತಯಾರಿಕ ಘಟಕವಾದ ಸ್ವರ್ಣೋದ್ಯಮದಲ್ಲಿ ತಯಾರಿಸಿದ್ದು ಸಂಸ್ಥೆಯ ನಿರ್ದೇಶಕರಾದ ಗುಜ್ಜಾಡಿ ರಾಮದಾಸ ನಾಯಕ್ರವರು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ ವಿವರಿಸಿದರು.
ಸರಕಾರದ ಉಸ್ತುವಾರಿಯಲ್ಲಿ ಸಿದ್ಧವಾದ ಮೊದಲ ಚಿನ್ನದ ರಥ ಇದಾಗಿದೆ. ಸರಕಾರದ ನಿರ್ದೇಶನದಂತೆಯೇ ಎನ್ಐಟಿಕೆಯವರಲ್ಲಿ ಅಭಿಪ್ರಾಯ ಕೇಳಲಾಗಿ ಎಲೆಕ್ಟ್ರೋಪ್ಲೇಟ್ , ಎಲೆಕ್ಟ್ರೋ ಪ್ರೇಮಿಂಗ್ಸ್ ಮತ್ತು ಲ್ಯಾಮಿನೇಶನ್ ವಿಧಾನದಲ್ಲಿ ಲ್ಯಾಮಿನೇಶನ್ ಮೂಲಕವೇ ತಯಾರಿಸುವುದೆಂದು ಅಭಿಪ್ರಾಯ ಬಂದಂತೆ ಟೆಂಡರ್ ಕರೆಯಲಾಗಿದ್ದು ಉಡುಪಿಯ ಸ್ವಣೋದ್ಯಮದವರು ಯಶಸ್ವಿ ಬಿಡ್ಡುದಾರರಾಗೊ ಟೆಂಡರ್ನ್ನು ಪಡೆದಿರುತ್ತಾರೆ. ಮಂಗಳೂರಿನ ಎನ್ಐಟಿಕೆಯ ಅನೇಕ ವಿಭಾಗದ ತಜ್ಞರನ್ನೊಳಗೊಂಡ ತಂಡದ ಮೂಲಕ ಈ ರಥದ ಕಾಮಗಾರಿಯು ನಡೆದಿದ್ದು ಪ್ರತಿಹಂತದಲ್ಲೂ ಗುಣಮಟ್ಟ ಹಾಗೂ ತೂಕದ ದೃಢೀಕರಣದೊಂದಿಗೆ ರಥವು ನಿರ್ಮಾಣವಾಗಿರುತ್ತದೆ, ಒಟ್ಟು ಎರಡು ಹಂತಗಳಲ್ಲಿ ಮತ್ತೇ ಪುನಃ ಆಯ್ಕೆ ಮಾಡಲ್ಪಟ್ಟ ಚಿನ್ನದ ಲ್ಯಾಮಿನೇಶನ್ ಮಾಡಲ್ಪಟ್ಟ ೨ ಭಾಗಗಳನ್ನು ಪುನಃ ಕರಗಿಸಿ ಗುಣಮಟ್ಟ ಹಾಗೂ ತೂಕದ ದೃಢೀಕರಣವನ್ನು ಮಾಡಿಸಿ ನಂತರ ಮರದ ರಥಕ್ಕೆ ಈ ತಗಡುಗಳನ್ನು ಜೋಡಿಸಿ ರಥ ನಿರ್ಮಾಣ ಮುಗಿಸಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು ೬೫೦ ಬೆಳ್ಳಿ ಭಾಗಗಳಲ್ಲಿ ಚಿನ್ನದ ಉಬ್ಬು ಶಿಲ್ಪಗಳನ್ನು ಮಾಡಿ ಅದಕ್ಕೆ ಚಿನ್ನದ ಲ್ಯಾಮಿನೇಶನ್ ಮಾಡಲಾಗಿದೆ. ಅಷ್ಟ ದಿಕ್ಪಾಲಕರು, ಎರಡು ಬಗೆಯ ಆರಾಧನಾ ವಿಧಾನವುಳ್ಳ ನವದುರ್ಗೆಯರ ಒಟ್ಟು ೧೮ ಮೂರ್ತಿಗಳು, ಅಷ್ಟ ಲಕ್ಷ್ಮಿಗಳ ಮೂರ್ತಿಯನ್ನು ಈ ರಥಕ್ಕೆ ಅಳವಡಿಸಲಾಗಿದ್ದು ಹಲವಾರು ಅಪೂರ್ವ ಶಿಲ್ಪಗಳನ್ನು ಈ ರಥಕ್ಕೆ ಅಳವಡಿಸಿ ನಿರ್ಮಿಸಿರುವುದು ರಥದ ಸೌಂದರ್ಯವನ್ನು ಹೆಚ್ಚಿಸಿದೆ. ದೇಗುಲದ ಒಳಗೆ ಇರುವ ಭದ್ರತಾ ಕೊಠಡಿಯಲ್ಲಿ ರಥವನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗುವುದು ಎಂದು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ವಿವರಿಸಿದರು.
ತಾ.೮ರಂದು ಚಿನ್ನದ ರಥದ ಸಮರ್ಪಣೆಯನ್ನು ಧಾರ್ಮಿಕ ದತ್ತಿ ಸಚಿವರಾದ ಸನ್ಮಾನ್ಯ ಟಿ.ಬಿ.ಜಯಚಂದ್ರ ದೇಗುಲಕ್ಕೆ ಮಾಡಲಿದ್ದು, ಕೃಷ್ಣಾಪುರ, ಪಲಿಮಾರು ಮಠಾಧೀಶರು, ಸಚಿವರಾದ ಸದಾನಂದ ಗೌಡ, ರಮಾನಾಥ ರೈ, ಅಭಯಚಂದ್ರ, ಆರ್. ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಾಂಸದ ನಳಿನ್ ಕುಮಾರ್, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ, ಎಂ.ಕೃಷ್ಣಪ್ಪ, ಐವನ್ ಡಿಸೋ, ದಯಾನಂದ ರೆಡ್ಡಿ, ಡಿ.ಯು.ಮಲ್ಲಿಕಾರ್ಜುನ, ಕರ್ನಾಟಕ ಬ್ಯಾಂಕಿನ ಪಿ.ಜಯರಾಮ ಭಟ್, ಕಟೀಲು ಸುರೇಶ್ ರಾವ್, ಮಾಲಾಡಿ ಅಜಿತ್ ಕುಮಾರ ರೈ, ಸುಧೀರಪ್ರಸಾದ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ. ಅಂದು ಲಿಂಗಪ್ಪ ಸೇರಿಗಾರಿಂದ ನಾಗಸ್ವರ ವಾದನ, ವಿದ್ಯಾಭೂಷಣರಿಂದ ಭಕ್ತಿ ಸಂಗೀತ, ಸುಬ್ರಹ್ಮಣ್ಯ ಭಟ್ ಗುಂಡಿಬೈಲುರಿಂದ ಅಷ್ಟಾವಧಾನ, ವಿದ್ಯಾಶ್ರೀಧರ ಕೃಷ್ಣಬಳಗದಿಂದ ನೃತ್ಯಾರ್ಚನೆ ನಡೆಯಲಿದೆ.
Tuesday, January 27, 2015
ಸಂಮಾನ
ಕಟೀಲು ಮಲ್ಲಿಗೆಅಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಯಕ್ಷಗಾನ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಕಲಾವಿದರಾದ ಸುಂದರ ಬಂಗಾಡಿ, ರಾಧಾಕೃಷ್ಣ ನಾವಡರನ್ನು ಸಂಮಾನಿಸಲಾಯಿತು. ಈ ಸಂದರ್ಭ ಕಟೀಲಿನ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶೀಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿಗಳಾದ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಧನಂಜಯ ಮಟ್ಟು, ಕೇಶವ ಕಟೀಲು, ತಿಮ್ಮಪ್ಪ ಕೋಟ್ಯಾನ್, ನವೀನ್ಕುಮಾರ್ ಕಟೀಲು, ಶಶೀಂದ್ರ ಅಮೀನ್, ಬಪ್ಪನಾಡು ಮೇಳದ ವಿನೋದ್ ಕುಮಾರ್, ಗೀತಾ ಸನಿಲ್, ಭ್ರಾಮರೀ ಫ್ರೆಂಡ್ಸ್ನ ಗಣೇಶ್ ಆಚಾರ್ಯ, ದುರ್ಗಾಪ್ರಸಾದ್ ಶೆಟ್ಟಿ ಮತ್ತಿತರರಿದ್ದರು.
Sunday, January 25, 2015
Friday, January 9, 2015
ಕಟೀಲಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಆರಂಭ
ಯಕ್ಷಗಾನ ಸಕಾಲಿಕ ಸಾರ್ವಕಾಲಿಕವಾಗಿರಲಿ - ಡಾ. ಚಿನ್ನಪ್ಪ ಗೌಡ
ಕಟೀಲು : ಕಾಲದ ಒತ್ತಡವನ್ನು ನಿಭಾಯಿಸಿಕೊಂಡು ಯಕ್ಷಗಾನವನ್ನು ಸಕಾಲಿಕವಾಗಿ ಸಾರ್ವಕಾಲಿಕವಾಗಿಸಬೇಕು. ಯಕ್ಷಗಾನಕ್ಕೆ ಒಪ್ಪುವ ಹಾಗೆ ಬದಲಾವಣೆ ಅಗತ್ಯವಿದೆ ಎಂದು ಮಂಗಳೂರು ವಿವಿಯ ಡಾ. ಚಿನ್ನಪ್ಪ ಗೌಡ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ ಎರಡು ಮೂರು ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಯಕ್ಷಗಾನ ಇವತ್ತು ವಿಶ್ವವ್ಯಾಪಿಯಾಗಿದೆ. ಇಲ್ಲಿನ ವೀರಪ್ಪ ಮೊಯ್ಲಿಯಂತಹವರೂ ತಾನು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದೇನೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ಉತ್ತರಕರ್ನಾಟಕದಲ್ಲಿ ರಾಜಕೀಯ ಹಾಗೂ ಜನರ ಅಸಡ್ಡೆಯ ಕಾರಣದಿಂದ ಮೂಡಲಪಾಯ, ದೊಡ್ಡಾಟ, ಸಣ್ಣಾಟದಂತಹ ಪ್ರಕಾರಗಳು ಬೆಳವಣಿಗೆ ಕಂಡಿಲ್ಲ ಎಂದು ವಿಷಾದಿಸಿದರು.
ಆಶಯ ಭಾಷಣ ಮಾಡಿದ ಅಕಾಡಮಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಯಕ್ಷಗಾನ ರಂಗಪ್ರಾಕಾರವನ್ನು ಇನ್ನಷ್ಟು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿರಾಜ್ಯಾದ್ಯಂತ ೧೬ಕಡೆಗಳಲ್ಲಿ ರಂಗಸಂಭ್ರಮವನ್ನು ನಡೆಸುತ್ತಿದ್ದೇವೆ ಎಂದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಸಾಪದ ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಶ್ರೀಮತಿ ಗೋಪಿಕಾ ಮಯ್ಯ, ರಮೇಶ್ ಭಟ್, ವಾಸುದೇವ ಶೆಣೈ ಮತ್ತಿತರರಿದ್ದರು.
ಅಕಾಡಮಿ ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ ಸ್ವಾಗತಿಸಿದರು. ಸದಸ್ಯ ತಾರಾನಾಥ ವರ್ಕಾಡಿ ವಂದಿಸಿದರು. ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಈ ರಂಗ ಸಂಭ್ರಮ ನಡೆಯುತ್ತಿದೆ.
ಶುಕ್ರವಾರ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.
ಮಕ್ಕಳ ಯಕ್ಷಗಾನ ವಿಚಾರಗೋಷ್ಟಿ
ಮಕ್ಕಳಲ್ಲಿ ಯಕ್ಷಗಾನದ ಆಸಕ್ತಿ ಮೂಡಿಸಿದರೆ ಅವರಲ್ಲಿ ಪುರಾಣ ಕಥೆಗಳ ವಿಚಾರ ತಿಳಿದು ಸಂಸ್ಕಾರ ತಿಳಿಯುತ್ತದೆ. ಆದರೆ ಯಕ್ಷಗಾನ ಕಲಿಕೆಯ ಉದ್ದೇಶವಿಟ್ಟುಕೊಂಡು ಮಕ್ಕಳಲ್ಲಿ ಹಣದ ಆಸೆ, ಪ್ರಶಸ್ತಿಯ ಆಮಿಷ ಒಡ್ಡಬಾರದು ಎಂದು ಕಟೀಲು ದುರ್ಗಾಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ರಂಗಸಂಭ್ರಮದಲ್ಲಿ ಕಲಾ ಸಂರಕ್ಷಣೆಯಲ್ಲಿ ಮಕ್ಕಳ ಮೇಳದ ಪಾತ್ರದ ಕುರಿತು ಉಪನ್ಯಾಸ ನೀಡಿದರು.
ಖ್ಯಾತ ಕಲಾವಿದ ಕೆ.ಗೋವಿಂದ ಭಟ್ ಮಕ್ಕಳಲ್ಲಿ ಯಕ್ಷಗಾನ ಆಸಕ್ತಿ ಬೆಳೆಸಲು ಹೆತ್ತವರ, ಶಾಲೆಗಳ ಪಾತ್ರ ಪ್ರಮುಖವಾದುದು ಎಂದರು.
ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಕುರಿತು ಡಾ.ದಿನಕರ ಪಚ್ಚನಾಡಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಆರ್. ವಾಸುದೇವ ಸಾಮಗ ಮಾತನಾಡಿ ಶಿಕ್ಷಣದಂತೆ ಯಕ್ಷಗಾನವೂ ವ್ಯಾಪಾರೀಕರಣವಾಗಿದೆ. ಮಕ್ಕಳಲ್ಲಿ ಯಕ್ಷಗಾನ ವೇಷ ಹಾಕಿಸುವುದಷ್ಟೇ ಅಲ್ಲ, ಅಧ್ಯಯನ ಮಾಡಿಸಬೇಕು ಎಂದರು.
ಪಾತಾಳ ವೆಂಕಟರಮಣ ಭಟ್, ಡಾ.ಶ್ರೀಧರ ಭಂಡಾರಿ, ಕರ್ಗಲ್ಲು ವಿಶ್ವೇಶ್ವರ ಭಟ್, ದೇವಾನಂದ ಭಟ್ ಬೆಳುವಾಯಿ, ಗಿರೀಶ ನಾವಡ, ಮಹಾಬಲೇಶ್ವರ ಆಚಾರ್ಯ ಚರ್ಚೆಯಲ್ಲಿ ಭಾಗವಹಿಸಿದ್ದರು. ಗಾಯತ್ರೀ ಎಸ್ ಉಡುಪ ಕಾರ್ಯಕ್ರಮ ನಿರೂಪಿಸಿದರು.
ಇಂದು(೧೦) ಹವ್ಯಾಸಿ ಯಕ್ಷಗಾನ, ಮೂಡಲಪಾಯ, ಸಣ್ಣಾಟ, ಸೂತ್ರದ ಬೊಂಬೆಯಾಟ, ಎಲ್ಸಿಡಿ ಪ್ರದರ್ಶನ ಹಾಗೂ ವಿಚಾರಗೋಷ್ಟಿಗಳಿವೆ.
Tuesday, January 6, 2015
ಜ.೯-೧೧ : ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ
ಮಕ್ಕಳ, ಹವ್ಯಾಸಿ, ಮಹಿಳಾ ಯಕ್ಷಗಾನ ಬಗ್ಗೆ ವಿಚಾರಗೋಷ್ಟಿ.
ಮೂರು ದಿನಗಳ ಸಂಭ್ರಮ
ತೆಂಕು ಬಡಗು ಮೂಡಲಪಾಯ ಯಕ್ಷಗಾನ, ಸಣ್ಣಾಟ, ಬೊಂಬೆಯಾಟ, ಸಂಗ್ಯಾಬಾಳ್ಯ ಪ್ರದರ್ಶನ
ಐವತ್ತಕ್ಕೂ ಹೆಚ್ಚು ವಿದ್ವಾಂಸರ ಉಪಸ್ಥಿತಿಯಲ್ಲಿ ೬ವಿಚಾರ ಗೋಷ್ಟಿಗಳು
ಕಟೀಲು : ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಜನವರಿ ೯ರಿಂದ ೧೧ರತನಕ ಕಟೀಲಿನಲ್ಲಿ ಯಕ್ಷಗಾನ ಬಯಲಾಟ ಸಂಭ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ನಡೆಯುವ ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ, ಹವ್ಯಾಸಿ ಯಕ್ಷಗಾನದ ಪರಿಕಲ್ಪನೆಯ ಈ ಯಕ್ಷಗಾನ ಬಯಲಾಟ ಸಂಭ್ರಮವನ್ನು ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ, ವಾಸುದೇವ ಆಸ್ರಣ್ಣ, ಕಬ್ಬಿನಾಲೆ ವಸಂತ ಭಾರದ್ವಾಜ, ನಿಂಗಯ್ಯ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ ಮುಂತಾದವರ ಉಪಸ್ಥಿತಿಯಲ್ಲಿ ಡಾ. ಚಿನ್ನಪ್ಪ ಗೌಡ ಉದ್ಘಾಟಿಸಲಿದ್ದಾರೆ.
ಅಂದು ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ನಡೆಯಲಿದೆ. ಅಂದು ಮಕ್ಕಳ ಮೇಳದ ಹೆಜ್ಜೆ ಗುರುತುಗಳು ಮತ್ತು ಕಲಾ ಸಂರಕ್ಷರಣೆಯಲ್ಲಿ ಮಕ್ಕಳ ಮೇಳದ ಪಾತ್ರ ಕುರಿತು ವಿಚಾರಗೋಷ್ಟಿ ನಡೆಯಲಿದ್ದು ಡಾ.ದಿನಕರ ಪಚ್ಚನಾಡಿ, ಶ್ರೀಹರಿನಾರಾಯಣದಾಸ ಆಸ್ರಣ್ಣ ಉಪನ್ಯಾಸ ನೀಡಲಿದ್ದಾರೆ. ವಾಸುದೇವ ಸಾಮಗ, ಗೋವಿಂದ ಭಟ್ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಕಾಡಮಿಯ ಸದಸ್ಯ ತಾರಾನಾಥ ವರ್ಕಾಡಿ ತಿಳಿಸಿದ್ದಾರೆ.
ತಾ. ೧೦ರಂದು ಬೆಳ್ಮಣ್ಣು ಯಕ್ಷಮಿತ್ರರಿಂದ ಹವ್ಯಾಸಿ ಯಕ್ಷಗಾನ ಸುದರ್ಶನ ವಿಜಯ, ಬೆಳಗಾಂ ಶ್ರೀ ಸದಾಶಿವ ಮಹಿಳೆಯರ ಸಣ್ಣಾಟ ಸಂಘ ಸಾಲಹಳ್ಳಿಯವರಿಂದ ಸಣ್ಣಾಟ ಸಂಗ್ಯಾ ಬಾಳ್ಯಾ, ತುಮಕೂರು ಬಸವೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಮೂಡಲಪಾಯ ಯಕ್ಷಗಾನ ಭಕ್ತ ಪ್ರಹ್ಲಾದ, ಮಂಡ್ಯ ನಾಗಮಂಗಲದ ಕಾಳಿಕಾಂಬಾ ಪ್ರಸನ್ನ ಯುವಜನ ಸೂತ್ರದ ಬೊಂಬೆಮೇಳದವರಿಂದ ಸೂತ್ರದ ಬೊಂಬೆಯಾಟ ಕನಕಾಂಗಿ ಕಲ್ಯಾಣ, ಕುಳಾಯಿ ಯಕ್ಷಮಂಜೂಷದವರಿಂದ ವಿಶ್ವವ್ಯಾಪಿ ಯಕ್ಷಗಾನದ ಅಪೂರ್ವ ಎಲ್ಸಿಡಿ ಪ್ರದರ್ಶನ ನಡೆಯಲಿದೆ.
ಅಂದು ಹರಕೆ ಆಟಗಳು ಕಲಾತ್ಮಕತೆ ಮತ್ತು ಕಲಾ ಸಂರಕ್ಷಣೆ ಹಾಗೂ ಹವ್ಯಾಸಿ ಯಕ್ಷಗಾನ ಸಾಧ್ಯತೆ ಮತ್ತು ಸಮಸ್ಯೆ ಬಗ್ಗೆ ವಿಚಾರಗೋಷ್ಟಿಯಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ ಉಪನ್ಯಾಸ ನೀಡಲಿದ್ದು, ಕಮಲಾದೇವಿಪ್ರಸಾದ ಆಸ್ರಣ್ಣ, ಚಂದ್ರಶೇಖರ ದಾಮ್ಲೆ ಮುಂತಾದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ತಾ.೧೧ರಂದು ಮಹಿಳಾ ಯಕ್ಷಗಾನ ಉಗಮ ಮತ್ತು ವಿಕಾಸ ಹಾಗೂ ಮಹಿಳಾ ಮೇಳ ಕಲಾತ್ಮಕತೆ ಮತ್ತು ಕಲಾ ಪ್ರಸರಣದ ಬಗ್ಗೆ ಡಾ. ನಾಗವೇಣಿ ಮಂಚಿ, ವಿದ್ಯಾ ಕೋಳ್ಯೂರು ಉಪನ್ಯಾಸ ನೀಡಿಲಿದ್ದಾರೆ. ಲೀಲಾವತೀ ಬೈಪಾಡಿತ್ತಾಯ, ವಿದ್ಯಾ ರಮೇಶ್ ಭಟ್ ಮುಂತಾದ ಸಾಧಕ ಮಹಿಳೆಯರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಅಂದು ಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ಕರ್ಣಾರ್ಜುನ, ಉಜಿರೆ ಬಿಂದು ಹವ್ಯಾಸಿ ಮಹಿಳಾ ತಂಡದಿಂದ ತೆಂಕುತಿಟ್ಟು ಯಕ್ಷಗಾನ ನರಕಾಸುರ ಮೋಕ್ಷ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರಭಾಖರ ಜೋಷಿ ಶಿಖರೋಪನ್ಯಾಸ ನೀಡಲಿದ್ದು, ಸಚಿವ ಅಭಯಚಂದ್ರ, ನಳಿನ್ ಕುಮಾರ್, ಪಂಜ ಭಾಸ್ಕರ ಭಟ್, ಡಾ.ನಾರಾಯಣ ಶೆಟ್ಟಿ, ಎಂ.ಎಲ್.ಸಾಮಗ, ಕಿಶನ್ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
Friday, January 2, 2015
ಕಟೀಲು: ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ
ಕಲಿತ ವಿದ್ಯಾಲಯದ ಋಣ ದೊಡ್ಡದು - ಮೋಹನ ಆಳ್ವ
ಕಟೀಲು : ಕಲಿತ ಶಾಲೆ, ಸಮಾಜದ ಋಣವನ್ನು ಯಾವುದಾದರೊಂದು ವಿಧದಲ್ಲಿ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಾ.ಮೋಹನ ಆಳ್ವ ಹೇಳಿದರು.
ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸಂಮಾನಿಸಿ ಮಾತನಾಡಿದರು.
ಪ್ರೌಢಶಾಲೆಯಲ್ಲಿ ಸೇವೆಗೈದು ನಿವೃತ್ತರಾದ ಉಮೇಶ್ ರಾವ್ ಎಕ್ಕಾರು, ಕೇಶವ ಹೊಳ್ಳ, ಸುಂದರ ಪೂಜಾರಿ, ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಸುರೇಶ್ ಭಟ್, ಸತೀಶ್ ಭಟ್, ಕೃಷ್ಣ ರಾವ್, ಸದಾನಂದ ಆಸ್ರಣ್ಣ, ಕೆ.ಆರ್.ಪ್ರಭು, ಸುಂದರ ಸೇರಿಗಾರ, ಜನಾರ್ದನ, ವಾಸು ಪೂಜಾರಿ ಮುಂತಾದವರನ್ನು ಕ್ರೀಡಾ ಸಾಧಕರನ್ನು ಸಂಮಾನಿಸಲಾಯಿತು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಮೌಲ್ಯಾಧಾರಿತ ಶಿಕ್ಷಣವನ್ನು ಕಟೀಲಿನ ಶಾಲಾ ಕಾಲೇಜುಗಳು ನೀಡುತ್ತಿವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಕಟೀಲಿನ ವಿದ್ಯಾ ಸಂಸ್ಥೆಗಳ ಕೊಡುಗೆ ಮಹತ್ತರವಾದುದು ಎಂದರು.
ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕರ್ನಾಟಕ ಸರಕಾರದ ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಉದ್ಯಮಿಗಳಾದ ಉದಯ ಕುಮಾರ್ ದುಬೈ, ಗಿರೀಶ್ ಶೆಟ್ಟಿ, ಸಂದೇಶ್ ಕುಮಾರ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ದಿವಾಕರ, ಕೇಶವ ಕಟೀಲು, ಆನಂದ ಶೆಟ್ಟಿ ಎಕ್ಕಾರು, ಪ್ರದ್ಯುಮ್ನ ರಾವ್, ಜಿಲ್ಲಾ ಪಂ. ಸದಸ್ಯ ಈಶ್ವರ್ ಕಟೀಲ್, ಕಟೀಲು ಪ್ರೌಢ ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಸುಬ್ರಹ್ಮಣ್ಯ ಪ್ರಸಾದ್, ಪ.ಪೂ. ಕಾಲೇಜು ಪ್ರಾಚಾರ್ಯರಾದ ಎಂ. ಬಾಲಕೃಷ್ಣ ಶೆಟ್ಟಿ, ಜಯರಾಮ ಪೂಂಜಾ, ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವನಮಾಲ, ಮತ್ತಿತರರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮತ್ತು ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
ಕಟೀಲು : ಕಲಿತ ಶಾಲೆ, ಸಮಾಜದ ಋಣವನ್ನು ಯಾವುದಾದರೊಂದು ವಿಧದಲ್ಲಿ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಾ.ಮೋಹನ ಆಳ್ವ ಹೇಳಿದರು.
ಶುಕ್ರವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು ಸಂಮಾನಿಸಿ ಮಾತನಾಡಿದರು.
ಪ್ರೌಢಶಾಲೆಯಲ್ಲಿ ಸೇವೆಗೈದು ನಿವೃತ್ತರಾದ ಉಮೇಶ್ ರಾವ್ ಎಕ್ಕಾರು, ಕೇಶವ ಹೊಳ್ಳ, ಸುಂದರ ಪೂಜಾರಿ, ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯ, ಸುರೇಶ್ ಭಟ್, ಸತೀಶ್ ಭಟ್, ಕೃಷ್ಣ ರಾವ್, ಸದಾನಂದ ಆಸ್ರಣ್ಣ, ಕೆ.ಆರ್.ಪ್ರಭು, ಸುಂದರ ಸೇರಿಗಾರ, ಜನಾರ್ದನ, ವಾಸು ಪೂಜಾರಿ ಮುಂತಾದವರನ್ನು ಕ್ರೀಡಾ ಸಾಧಕರನ್ನು ಸಂಮಾನಿಸಲಾಯಿತು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಮೌಲ್ಯಾಧಾರಿತ ಶಿಕ್ಷಣವನ್ನು ಕಟೀಲಿನ ಶಾಲಾ ಕಾಲೇಜುಗಳು ನೀಡುತ್ತಿವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಕಟೀಲಿನ ವಿದ್ಯಾ ಸಂಸ್ಥೆಗಳ ಕೊಡುಗೆ ಮಹತ್ತರವಾದುದು ಎಂದರು.
ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕರ್ನಾಟಕ ಸರಕಾರದ ರಾಜ್ಯ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಉದ್ಯಮಿಗಳಾದ ಉದಯ ಕುಮಾರ್ ದುಬೈ, ಗಿರೀಶ್ ಶೆಟ್ಟಿ, ಸಂದೇಶ್ ಕುಮಾರ್ ಶೆಟ್ಟಿ, ಆದರ್ಶ ಶೆಟ್ಟಿ ಎಕ್ಕಾರು, ದಿವಾಕರ, ಕೇಶವ ಕಟೀಲು, ಆನಂದ ಶೆಟ್ಟಿ ಎಕ್ಕಾರು, ಪ್ರದ್ಯುಮ್ನ ರಾವ್, ಜಿಲ್ಲಾ ಪಂ. ಸದಸ್ಯ ಈಶ್ವರ್ ಕಟೀಲ್, ಕಟೀಲು ಪ್ರೌಢ ಶಾಲಾ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಸುಬ್ರಹ್ಮಣ್ಯ ಪ್ರಸಾದ್, ಪ.ಪೂ. ಕಾಲೇಜು ಪ್ರಾಚಾರ್ಯರಾದ ಎಂ. ಬಾಲಕೃಷ್ಣ ಶೆಟ್ಟಿ, ಜಯರಾಮ ಪೂಂಜಾ, ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವನಮಾಲ, ಮತ್ತಿತರರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ಮತ್ತು ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.
Thursday, January 1, 2015
ಕಟೀಲು ಪದವಿ ಕಾಲೇಜು ರಜತ ಮಹೋತ್ಸವ
ಕೇವಲ ಅಂಕಗಳು ಮಾತ್ರ ಮಾನದಂಡವಾಗಿರಬಾರದು - ವಿನಯ ಹೆಗ್ಡೆ
ಕಿನ್ನಿಗೋಳಿ : ದೇಶದ ಹೆಮ್ಮೆಯ ಸಂಸ್ಕೃತ ಭಾಷೆಯನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು. ಕಲಿಕೆಯಲ್ಲಿ ಅಂಕಗಳಷ್ಟೇ ಮಾನದಂಡವಾಗಿರದೆ ಎಲ್ಲ ವಿಚಾರಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯ ಅಧ್ಯಕ್ಷ ವಿನಯ ಎಸ್. ಹೆಗ್ಡೆ ಹೇಳಿದರು.
ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಭಾಷಾ ಮಾಧ್ಯಮ ಹಾಗೂ ಅಂಕಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆ ಸರಿಯಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.
ಕಲಿತ ವಿದ್ಯಾಲಯವನ್ನು ಮರೆಯದೆ ಬಂದು ಹೋಗುವ ಕರ್ತವ್ಯ ವಿದ್ಯಾರ್ಥಿಗಳದ್ದು ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೊಕ್ತೇಸರ ವಾಸುದೇವ ಆಸ್ರಣ್ಣ, ಸಾಂಸದ ನಳಿನ್ಕುಮಾರ್ ಕಟೀಲು, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಮುಂಬೈ ಉದ್ಯಮಿ ಎಕ್ಕಾರು ಕೃಷ್ಣ ಡಿ.ಶೆಟ್ಟಿ, ಕುಸುಮೋದರ ಶೆಟ್ಟಿ, ದ.ಕ. ಜಿಲ್ಲಾ ಪಂ. ಸದಸ್ಯ ಈಶ್ವರ ಕಟೀಲ್, ಮುಂಬೈ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪದ್ಮಲತಾ ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಕೃಷ್ಣ ಕಾಂಚನ್ ಹಾಗೂ ಸ್ನಾತಕೋತ್ತರ ಸಂಸ್ಕೃತ ಕಾಲೇಜು ಪ್ರಾಚಾರ್ಯ ಪದ್ಮನಾಭ ಮರಾಠೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಎಂ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
ಕಿನ್ನಿಗೋಳಿ : ದೇಶದ ಹೆಮ್ಮೆಯ ಸಂಸ್ಕೃತ ಭಾಷೆಯನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು. ಕಲಿಕೆಯಲ್ಲಿ ಅಂಕಗಳಷ್ಟೇ ಮಾನದಂಡವಾಗಿರದೆ ಎಲ್ಲ ವಿಚಾರಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯ ಅಧ್ಯಕ್ಷ ವಿನಯ ಎಸ್. ಹೆಗ್ಡೆ ಹೇಳಿದರು.
ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಭಾಷಾ ಮಾಧ್ಯಮ ಹಾಗೂ ಅಂಕಗಳ ಬಗ್ಗೆ ಪೋಷಕರಲ್ಲಿ ಕೀಳರಿಮೆ ಸರಿಯಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.
ಕಲಿತ ವಿದ್ಯಾಲಯವನ್ನು ಮರೆಯದೆ ಬಂದು ಹೋಗುವ ಕರ್ತವ್ಯ ವಿದ್ಯಾರ್ಥಿಗಳದ್ದು ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೊಕ್ತೇಸರ ವಾಸುದೇವ ಆಸ್ರಣ್ಣ, ಸಾಂಸದ ನಳಿನ್ಕುಮಾರ್ ಕಟೀಲು, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಮುಂಬೈ ಉದ್ಯಮಿ ಎಕ್ಕಾರು ಕೃಷ್ಣ ಡಿ.ಶೆಟ್ಟಿ, ಕುಸುಮೋದರ ಶೆಟ್ಟಿ, ದ.ಕ. ಜಿಲ್ಲಾ ಪಂ. ಸದಸ್ಯ ಈಶ್ವರ ಕಟೀಲ್, ಮುಂಬೈ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪದ್ಮಲತಾ ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಕ್ಷೇಮಪಾಲನಾಧಿಕಾರಿ ಡಾ. ಕೃಷ್ಣ ಕಾಂಚನ್ ಹಾಗೂ ಸ್ನಾತಕೋತ್ತರ ಸಂಸ್ಕೃತ ಕಾಲೇಜು ಪ್ರಾಚಾರ್ಯ ಪದ್ಮನಾಭ ಮರಾಠೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕ ಎಂ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)