Sunday, August 11, 2013

ಆ.೨೫: ಕಟೀಲು ದೇಗುಲದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ


ಕುದ್ರು ಅಭಿವೃದ್ಧಿ ಕಾಮಗಾರಿ ಆರಂಭ, ಕಾಗದ ರಹಿತ ಕಚೇರಿ ಉದ್ಘಾಟನೆ
ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಭಿವೃದ್ಧಿ ಪರ್ವ ಆರಂಭವಾದಂತಿದೆ. ತಾ.೨೫ರಂದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಸುಮಾರು ನಾಲ್ಕು ಕೋಟಿ ರೂ.ಗೂ ಮಿಕ್ಕಿದ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ ನಡೆಯಲಿದೆ. ಈಗಾಗಲೇ ಚಿನ್ನದ ರಥದ ಬೆಳ್ಳಿಯ ಕಾರ‍್ಯಗಳು ಪೂರ್ಣಗೊಂಡಿದ್ದು, ಚಿನ್ನದ ಕೆಲಸ ನಡೆಯಬೇಕಿದೆ. ಈ ಕಾರ‍್ಯಕ್ಕೆ ತಾ.೨೫ರ ಕಾರ‍್ಯಕ್ರಮದಲ್ಲಿ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ.
ಕಟೀಲು ಭ್ರಾಮರೀಯ ಮೂಲಸ್ಥಾನ ಕುದ್ರುವಿನಲ್ಲಿ ಸುಮಾರು ಎರಡು ಕೋಟಿ ರೂ.ಗಳಲ್ಲಿ ಕೆರೆಗಳ ನಿರ್ಮಾಣ, ಯಾಜ್ಞಿಕ ವೃಕ್ಷಗಳ ನೆಡುವಿಕೆ, ಮಾಡು ರಹಿತ ಗರ್ಭಗುಡಿಯ ನಿರ್ಮಾಣ ಹೀಗೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆಗಿರುವ ಕಾಮಗಾರಿಗಳನ್ನು ಸಚಿವ ವಿನಯಕುಮಾರ ಸೊರಕೆ ಉದ್ಘಾಟಿಸಲಿದ್ದಾರೆ.
ದೇಗುಲದ ಸೇವಾ, ಆಡಳಿತ ಕಚೇರಿಯಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಕಾಗರ ರಹಿತ ಕಚೇರಿಯನ್ನಾಗಿಸುವ ಪ್ರಯತ್ನ ಮಾಡಲಾಗಿದೆ. ಈ ಯೋಜನೆಯನ್ನು ಉದ್ಘಾಟಿಸುವವರು ಸಚಿವ ಯು.ಟಿ.ಖಾದರ್. ಈ ಸಂದರ್ಭ ಉಪಸ್ಥಿತರಿರುವವರು ಸಚಿವ ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್‌ಬಾವಾ, ಗಣೇಶ ಕಾರ್ಣಿಕ್, ಮೋನಪ್ಪ ಭಂಡಾರಿ, ದಯಾನಂದ ರೆಡ್ಡಿ, ಧಾಂಇಕ ಆಯುಕ್ತ ನಂದಕುಮಾರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸೇರಿದಂತೆ ವಿವಿಧ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

No comments:

Post a Comment